ಅಪರಾಧಿಗಲ್ಲವೇ ಶಿಕ್ಷೆ?

ಅಪರಾಧಿಗಲ್ಲವೇ ಶಿಕ್ಷೆ?
ನಿರಪರಾಧಿಗಳಿಗೇತಕೆ ಶಿಕ್ಷೆ|
ಮಾಡಿದ ತಪ್ಪಿಗಲ್ಲವೆ ದಂಡ
ನೋಡಿದ ಸತ್ಯಕೇತಕೆ ದಂಡ||

ಮನುಜ ಅಧರ್ಮದಿ ನಡೆದು
ತನ್ನ ಸ್ವಾರ್ಥಸಾದನೆಗೆ
ಏನಬೇಕಾದರು ಮಾಡುವನು
ಹೇಗೆ ಬೇಕಾದರು ಸುಳ್ಳ ಹೇಳುವನು|
ಧರ್ಮದಿ ಬದುಕುವ ಜನರ
ಬಲಿಪಶುವ ಮಾಡಿ
ಅಟ್ಟಾಹಾಸದಿ ಮೆರೆಯುವನು||

ಕೋತಿ ಮೊಸರನು ತಿಂದು
ಮೇಕೆ ಬಾಯಿಗೆ ವರಸಿದಂತೆ|
ಹಣವಂತರು ಅಧಿಕಾರಿಗಳಕೊಂಡು,
ಸತ್ಯಸಾಕ್ಷಾಧಾರಗಳ ತಿರುಚಲಾಗಿ|
ನ್ಯಾಯ ಧರ್ಮ ನಡುಗಿ ನರಳುತಿದೆ
ಅಧರ್ಮ ಆರ್ಭಟಿಸುತ್ತಿದೆ||

ಕೃಷ್ಣಾ ನೀನು ಬರಲೇ ಬೇಕು
ಮತ್ತೆ ಧರ್ಮ ಸಂಸ್ಥಾಪನೆಯಾಗಬೇಕು|
ಇವರ ದರ್ಪ, ದೌರ್ಜನ್ಯ
ಕೊನೆಗಾಣಬೇಕು, ನೊಂದವರ
ಕಣ್ಣೀರು ನಿಲ್ಲಲೇಬೇಕು|
ಸಂಭವಾಮಿ ಯುಗೇ ಯುಗೇ ಆಗಲೇಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಮನೋವೈಜ್ಞಾನಿಕ ವಿಶ್ಲೇಷಣೆ : ಹಿಂಸಾತ್ಮಕ ಕ್ರಿಯೆಗೆ ಸಿರೋಟೋನಿನ್ ಅಭಾವವೇ ಕಾರಣ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೦

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys